ತ್ರಿಸಿಂಧುತೀರೇ ತ್ರಿಲೋಕಜನನಿಜಯತಿ ತ್ರಿಗುಣೇಶ್ವರಿ, ಧನ್ಯಾ ಕನ್ಯಾಕುಮಾರಿ ॥ ಧೃ ॥ ಗಂಗಾಜಲನಿಧಿ ವಂದಿತ ಚರಣಾಸಿಂಧುಜಲಧಿ ಸಂಪ್ರಾರ್ಥಿತ ಕರುಣಾಹಿಂದೂಮಹೋದಧಿ ವಿಹಿತಸ್ತವನಾಮಹಾಲವಾಧೀಶ್ವರಿ, ಧನ್ಯಾ ಕನ್ಯಾಕುಮಾರಿ ॥ ೧ ॥ ಪೂರ್ವಸಾಗರೇ ಉದೀಯಮಾನಃಅಪರ ಸಾಗರೇ ವಿಲೀಯಮಾನಃಸವಿತಾಸಂಧ್ಯ ವಂದನಮನಿಷಮ್ಕುರುತೇ ನಿರಹಂಕಾರಿ, ಧನ್ಯಾ ಕನ್ಯಾಕುಮಾರಿ ॥ ೨ ॥ ಪೂರ್ವಾಚಲ ಏಕತೋ ವಲೀಯಾಮ್ಪಶ್ಚಿಮಾಚಲೋ ಪರತೋತಿಮಹಾನ್ತರುವರಚಾಮರ ವೀಜನ ಮನೀಷಮ್ಸಂತನುತೇ ಪ್ರಹರಿ, ಧನ್ಯಾ ಕನ್ಯಾಕುಮಾರಿ ॥ ೩ ॥ ದೀಪಮಾಲಿಕಾ ಪ್ರಕಾಶಮಾನಾಸುವಿಹಿತ ಚಂದನ ಪಂಖ ಲಿಂಪನಾಸುಸ್ಮಿತವದನಾ ಪ್ರಸನ್ನ ನಯನಾವಿಭಾತಿ ಪರಮೇಶ್ವರಿ, ಧನ್ಯಾ ಕನ್ಯಾಕುಮಾರಿ ॥ ೪ ॥
ಜಯ ಮಹಾಮಂಗಲೇ ಜಯ ಸದಾ ವತ್ಸಲೇ |ದೇವೀ ಪರಮೋಜ್ಜ್ವಲೇ ಭರತ ಭೂ ರೂಪಿಣಿ || ಹಿಮಗಿರಿ ಕಿರೀಟಿನಿ ಸುರ-ತಟಿನೀ ಮಾಲಿನಿ |ಜಲಧಿ-ವಲಯಾಂಕಿತೇ ಜಯ ಜಗನ್ಮೋಹಿನಿ || 1 || ಭ್ರಮಪಟಲ ಹಾರಿಣಿ ದುರ್ಮೋಹ ವಿಧ್ವಂಸಿನಿ |ಜಯ ಸದಾ ಶಾರದೇ ಬುದ್ಧಿ ಬಲದಾಯಿನಿ || 2 || ಅಖಿಲಾಖಲ ಮರ್ದಿನಿ ಸುಜನಾ ಬಲವರ್ಧಿನಿ |ಜಯ ಸಮರ ಚಂಡಿಕೇ ರೌದ್ರ ತನುಧಾರಿಣಿ || 3 || ಸತ್ಯ ಸಾವಿತ್ರೀ ಜಯ ಪುಣ್ಯ ಗಾಯತ್ರೀ ಜಯ |ವಿಮಲ ಸುಖಧಾತ್ರೀ ಜಯ ದಿವ್ಯ […]
ಗುರಿನೀಡಿ ಸಾಧನೆಗೆ ಬೆಂಬಲಕೆ ತಾನಿಂದಕರಪಿಡಿದು ಗುರಿಯೆಡೆಗೆ ಅವನೆ ಕರೆತಂದ ಗೂಢಜ್ಞಾನವನೆಮಗೆ ಕಲಿಸಿದನು ಗುರುದೇವಒಂದೊಂದು ಅಕ್ಷರವೂ ಮೂಲಮಂತ್ರಸ್ವಾನುಭವ ಮೂಸೆಯಲಿ ಅರಳಿರುವ ಜ್ಞಾನವದುಸಾಕ್ಷಿ ನೀಡುತಲೆಮಗೆ ಉಣಬಡಿಸಿದ ಸಾಕ್ಷಿಪ್ರಜ್ಞೆಯನಿಟ್ಟ ಧರ್ಮಸೂಕ್ಷ್ಮದ ಮೇಲೆಧರ್ಮವೇ ರಾಷ್ಟ್ರದ ಮೂಲವೆಂದುಕಾರ್ಯಗೈಯ್ಯುವುದೆಲ್ಲ ಧರ್ಮ ರಕ್ಷಣೆಗಾಗಿಧರ್ಮವುಳಿಯಲೆಬೇಕು ರಾಷ್ಟ್ರಕೆಂದ ಶಾಸ್ತ್ರವಿದ್ಯೆಯ ಜೊತೆಗೆ ಶಸ್ತ್ರದನುಸಂಧಾನವ್ಯಕ್ತಿತ್ವ ನಿರ್ಮಿತಿಯು ರಾಷ್ಟ್ರಕೆಂದಗುರಿಯೆಡೆಗೆ ನಡೆಯುತಿಹ ದಾರಿಯದು ದುರ್ಗಮವುಸ್ವಪ್ರಜ್ಞೆಯಲಿ ನಡೆದರೆ ಸುಖವು ಎಂದ
ನಾ ನಿನ್ನವ ನೀ ನನ್ನವನಾಗುಕತ್ತಲು ತುಂಬಿದ ಬಾಳನು ಬೆಳಗು //ಪ//ತವ ತೇಜೋಮಯ ಜೀವನ ಕಿರಣ,ಬೆಳಗಲಿ ನಾಡಿನ ಅಂತಃಕರಣ //ಅ.ಪ.// ನಿನ್ನಯ ಬದುಕಿನ ಪ್ರತಿ ಕ್ಷಣಕ್ಷಣವೂನಿನ್ನ ಶರೀರದ ಕಣ ಕಣ ಕಣವೂರಾಷ್ಟ್ರಯಜ್ಞದಲಿ ಆಹುತಿಯಾಯ್ತುತ್ಯಾಗಸಮರ್ಪಣೆ ಮಾದರಿಯಾಯ್ತು //೧// ಉನ್ನತಪದವಿಯ ಬೆಂಬಲವಿದ್ದರು,ಹೊನ್ನಿನ ಗಳಿಕೆಯ ಹಂಬಲ ತ್ಯಜಿಸಿಕಟ್ಟಿದೆ ನೀ ಅನುಪಮ ಸಂಘಟನೆಆವರಿಸಿಹುದು ಸಕಲ ಜಗವನೇ //೨// ಸದ್ಗುಣಗಳ ಗಣಿ ನೀನಾಗಿರುವೆಆದರ್ಶದ ಪಥವನು ನಿರ್ಮಿಸಿಹೆನಿನ್ನಂತೆಯೆ ನಾನಾಗುವ ಆಸೆತೊಟ್ಟಿಹೆ ಘನಸಾಧನೆಯಾ ದೀಕ್ಷೆ //೩// ಹಿಂದುತ್ವದ ಬಂಧುತ್ವದ ಸೆಲೆಯುಹೃದಯಹೃದಯಗಳ ಬೆಸೆಯುವ ಕಲೆಯುಸಂಘಶತಾಬ್ದಿಯ ಹೆಮ್ಮೆಯ ಕ್ಷಣವುಬರಲಿದೆ ವೈಭವದಾ ಶುಭದಿನವು […]
ರಾಷ್ಟ್ರದಾರಾಧನೆಗೆ ಕರೆಯಿದುವೆ ಬಂದಿಹುದುಶ್ರಮ ಸಮಯವನ್ನೆಲ್ಲ ನೀಡಬನ್ನಿಬದುಕು ನಶ್ವರವೆಂದು ಧ್ಯೇಯ ಶಾಶ್ವತವೆಂದುಹಿಂದುತ್ವದಡಿಯಲ್ಲಿ ದುಡಿಯಬನ್ನಿಸ್ವಾರ್ಥವರಿಯದ ಬದುಕ ಬಾಳಬನ್ನಿಓ ಬನ್ನಿ ಯುವಜನರೆ ಬೇಗಬನ್ನಿ ಕೇಶವನು ತಾನುರಿದು ಕಿಡಿಯೊಂದನುರಿಸಿರಲುಪ್ರತಿ ಹಿಂದುವೆದೆಯಿಂದು ಅಗ್ಗಿಷ್ಟಿಕೆಮಾಧವನ ಜೀವನದ ಹಣತೆಯಿದು ಬೆಳಗಿರಲುದೂರವಾಗಿದೆ ಸ್ವಾರ್ಥ ತನ್ನಷ್ಟಕೆರಾಷ್ಟ್ರ ಯಜ್ಞಕೆ ಸಮಿಧೆಯಾಗಬನ್ನಿಓ ಬನ್ನಿ ಯುವಜನರೆ ಬೇಗ ಬನ್ನಿ ಹಿಂದುತ್ವದಸ್ಮಿತೆಗೆ ರಾಷ್ಟ್ರದೇಕಾತ್ಮತೆಗೆಸಂಘಕಾರ್ಯದ ಸರಳ ಭಾಷ್ಯವಿಹುದುಅಂಜುವೆದೆ ನಮದಲ್ಲ ಗೊಂದಲವು ನಮಗಿಲ್ಲನಂಜು ನುಂಗಿದ ಶಿವನ ವಂಶವೆಮದುಶಂಕೆ ಅಂಜಿಕೆ ದೂರ ಸರಿಸಿ ಬನ್ನಿಓ ಬನ್ನಿ ಯುವಜನರೆ ಬೇಗ ಬನ್ನಿ ಗುರು ಭಗವೆಯಡಿಯಲ್ಲಿ ನಿತ್ಯ ಸಾಧನೆ ನಮದುಶಕ್ತಗೊಳುತಿದೆ ನೈಜ ರಾಷ್ಟ್ರಭಕ್ತಿಶತಮಾನ […]
ಸಂಘ ಮಂದಿರವಿಂದು ಮೈತಳೆದು ನಿಂತಿಹುದುಗರ್ಭಗುಡಿಯಲಿ ತಾಯ ದಿವ್ಯಮೂರ್ತಿಭಂಗವಿಲ್ಲದ ಪೂಜೆ ಅನುದಿನವು ನಡೆದಿಹುದುಆರದಂತುರಿದಿಹುದು ಧ್ಯೇಯಜ್ಯೋತಿ ದೇಗುಲದ ಭಿತ್ತಿಯೊಳು ಶಿಲೆಗಳಿವೆ ಹಲವುಬಗೆಅಡಿಗಲ್ಲು ತಾನಾದ ಕೇಶವನು ಅಂದುಬಾಗಿಲದು ತೆರೆದಿಹುದು ಬೆಳಕಿಹುದು ಒಳಹೊರಗೆಗುಡಿಯ ಮೆಟ್ಟಿಲು ಆದ ಮಾಧವನು ಅಂದು ಮಂತ್ರ ತಂತ್ರಗಳಿರದ ಮುಗ್ಧಭಾವದ ಜೊತೆಗೆಶ್ರಮ ಸಮಯಗಳೆ ಇಲ್ಲಿ ನೈವೇದ್ಯವುಯಾಂತ್ರಿಕತೆ ಸುಳಿವಿರದ ಅನುದಿನದ ಸಾಧನೆಗೆಗುರುಭಗವೆಯಾ ದಿವ್ಯ ಸಾನ್ನಿಧ್ಯವು ಪರಮವೈಭವಕಾಗಿ ಸಾಧನೆಯು ನಡೆದಿಹುದುಕೈಬೀಸಿ ಕರೆದಿಹುದು ಕಾರ್ಯಕ್ಷೇತ್ರರಾಷ್ಟ್ರದಾರಾಧನೆಗೆ ಶತಮಾನ ಸಂದಿಹುದುತಾಯ್ನೆಲವೆ ನಮಗಿಂದು ತೀರ್ಥಕ್ಷೇತ್ರ
ಗುರಿಯನು ತೋರಿದ ಶ್ರೀಗುರು ಭಗವೆಗೆ ನಮಿಪೆನು ಅನುದಿನ ಅಡಿಗಡಿಗೆ|ತ್ಯಾಗದ ಶೌರ್ಯದ ಓ ಪ್ರತಿನಿಧಿಯೇ ಸ್ಫೂರ್ತಿಯ ಕರುಣಿಸು ಸಕಲರಿಗೆ||ಪ|| ಧೈರ್ಯವ ತುಂಬುತ ಮೌಢ್ಯವ ಕಿತ್ತೊಗೆ ಧ್ಯೇಯದ ಜಾಗೃತಿ ನೀಡೆಮಗೆಮನದಲಿ ಕವಿದಿಹ ಜಡತೆಯ ನೀಗಿಸಿ ಬೆಳಕನು ಜ್ವಲಿಸು ನಮ್ಮೊಳಗೆ||೧|| ಶುದ್ಧತೆ ನೀಡುತ ಕಲುಷಿತ ಮನಸಿಗೆ ಆದ್ಯತೆ ಕಾರ್ಯದ ಬದ್ಧತೆಗೆಬುದ್ಧಿಮತ್ತೆಯ ಕೊಡು ಜತೆಜತೆ ನಡಿಗೆಗೆ ಸಿದ್ಧಗೊಳಿಸುನೀ ಏಕತೆಗೆ||೨|| ತರತಮವಿಲ್ಲದೇ ರಾಷ್ಟ್ರದ ಕಾರ್ಯಕೆ ಸರಿಸಮ ಭಾವವ ಕೊಡು ಜನಕೇಸರ್ವಸಮರ್ಪಣೆ ಇತ್ತಾ ನೆಲಕೆ ಪರಹಿತವೇ ಗುರಿ ಕಾಯಕಕೆ||೩||
ಮಾತೃಭೂಮಿಯ ಸೇವೆಗೈಯ್ಯುವ ಸರಳ ಸೂತ್ರದ ಹಂದರಪುಣ್ಯಭೂಮಿಯ ಸತತ ನೆನೆಯುವ ನಿತ್ಯಸಾಧನೆ ಸುಂದರ ॥ ಪ॥ ಭಾಷೆ ಭಿನ್ನತೆ ಹಿಂದೆ ಸರಿದಿದೆ ಹಿಂದು ಸತ್ವವೆ ಪ್ರೇರಣೆದ್ವೇಷ ಕಳೆಯುತ ಶಕ್ತವಾಗಿದೆ ಸಾಮರಸ್ಯದ ಭಾವನೆದೋಷವೆಲ್ಲವ ಸರಿಸಿ ದೂರಕೆ ನಿತ್ಯ ನಡೆದಿದೆ ಸಾಧನೆನಾಶವಾಗಿದೆ ಸ್ವಾರ್ಥಲಾಲಸೆ ಸ್ವಂತವೆಲ್ಲವು ಅರ್ಪಣೆ ॥ 1 ॥ ಧ್ಯೇಯಮಾರ್ಗದಿ ನಡೆಯು ನಮ್ಮದು ಕಾರ್ಯಪದ್ಧತಿ ಸಾತ್ವಿಕದೇಶಕಾಗಿಯೆ ದುಡಿವ ಕಾರ್ಯಕೆ ಭಗವೆ ಎಮ್ಮಯ ಪ್ರೇರಕಸಿದ್ಧಗೊಂಡಿದೆ ಕಾರ್ಯಭೂಮಿಕೆ ವ್ಯಕ್ತಿ ವ್ಯಕ್ತಿಯು ಸಾಧಕಶತಕದಂಚಿನ ಸಂಘಕಾರ್ಯವೆ ನಾಡಿನೇಳ್ಗೆಗೆ ಪೂರಕ ॥ 2 ॥ ದೇಶಕಾರ್ಯವೆ ಈಶಕಾರ್ಯವು […]
ನಿಶೆಯು ಸರಿದಿದೆ ಜಡತೆ ನೀಗಿದೆ ಉಷೆಯು ಗಾರುಡಿ ಬೀಸಿದೆ ಕ್ಲೇಶ ಕಳೆದಿದೆ ಆಸೆ ಫಲಿಸಿದೆ ಯಶವು ನಾಡಿಗೆ ಕಾದಿದೆ || ಪ || ಸಂದ ಜಯವಿದು ಶುಭದ ಸೂಚನೆ ನನಸು ಸಾವಿರ ಕಲ್ಪನೆ ಕುಂದು ಕೊರತೆಯ ನೀಗಿ ವಿಶ್ವಕೆ ವಂದ್ಯರೆನಿಸಲು ಪ್ರೇರಣೆ || 1 || ಅಂದು ಯಜ್ಞಕೆ ಸಮಿಧೆಯಾದರು ದಾಸ ಶರಣರು ಸಂತರು ಇಂದು ಸೇವೆಯ ವ್ರತದಿ ಬದ್ಧರು ಕರ್ಮರಂಗದ ಧೀರರು || 2 || ಬಂಧುಭಾವವು ಐಕ್ಯ ತಂದಿದೆ ಜಾತಿಗೋಡೆಯ ಕೆಡವಿದೆ ಸ್ವಾರ್ಥ ಸುಳಿಯದ […]
ಜಗತ್ತಿಗೆ ಜಗದ್ಗುರು ಅನಿಸಿಕೊಂಡ ಭೂಮಿ ಇದು ರಾಮಾ ಕೃಷ್ಣ ಇಲ್ಲಿ ಅವತಾರ ತಾಳಿ ಹೋಗ್ಯಾರ್ರೀ| ಅವತಾರ ತಾಳಿ ಹೋಗ್ಯಾರ್ರೀ ಸ್ನೇಹ ತುಂಬಿದ್ ಆಚರಣೆ ಸಂಪದ್ಭರಿತ ದೇಶ ನಮದು ಮುತ್ತು ರತ್ನ ಬಜಾರದಾಗ ಮಾರುತ್ತಿದ್ದರ್ರೀ || ಪ || ಹೂಣ ಶಕ ಮೊಘಲರು ಡಚ್ ಫ್ರೆಂಚ್ ಆ೦ಗ್ಲಾರು ದೇಶ ಕೋಶ ನಾಶ ಮಾಡಿ ಜೀವ ತಗದಾರ್ರೀ| ನಮ್ಮ ಜೀವ ತಗದಾರ್ರೀ ಲಕ್ಷ ಲಕ್ಷ ಜನ ತಮ್ಮ ಮನಿ ಮಠ ಸುಟಗೊಂಡ್ರು ಸ್ವಾತಂತ್ರ ಇದು ನಮಗೆ ಹಂಗೆ ಸಿಕ್ಕಿಲ್ಲರ್ರೀ || […]