ರಾಷ್ಟ್ರದಾರಾಧನೆಗೆ ಕರೆಯಿದುವೆ ಬಂದಿಹುದು

ರಾಷ್ಟ್ರದಾರಾಧನೆಗೆ ಕರೆಯಿದುವೆ ಬಂದಿಹುದುಶ್ರಮ ಸಮಯವನ್ನೆಲ್ಲ ನೀಡಬನ್ನಿಬದುಕು ನಶ್ವರವೆಂದು ಧ್ಯೇಯ ಶಾಶ್ವತವೆಂದುಹಿಂದುತ್ವದಡಿಯಲ್ಲಿ ದುಡಿಯಬನ್ನಿಸ್ವಾರ್ಥವರಿಯದ ಬದುಕ ಬಾಳಬನ್ನಿಓ ಬನ್ನಿ ಯುವಜನರೆ ಬೇಗಬನ್ನಿ ಕೇಶವನು ತಾನುರಿದು ಕಿಡಿಯೊಂದನುರಿಸಿರಲುಪ್ರತಿ ಹಿಂದುವೆದೆಯಿಂದು ಅಗ್ಗಿಷ್ಟಿಕೆಮಾಧವನ ಜೀವನದ ಹಣತೆಯಿದು ಬೆಳಗಿರಲುದೂರವಾಗಿದೆ ಸ್ವಾರ್ಥ ತನ್ನಷ್ಟಕೆರಾಷ್ಟ್ರ ಯಜ್ಞಕೆ ಸಮಿಧೆಯಾಗಬನ್ನಿಓ ಬನ್ನಿ ಯುವಜನರೆ ಬೇಗ ಬನ್ನಿ ಹಿಂದುತ್ವದಸ್ಮಿತೆಗೆ ರಾಷ್ಟ್ರದೇಕಾತ್ಮತೆಗೆಸಂಘಕಾರ್ಯದ ಸರಳ ಭಾಷ್ಯವಿಹುದುಅಂಜುವೆದೆ ನಮದಲ್ಲ ಗೊಂದಲವು ನಮಗಿಲ್ಲನಂಜು ನುಂಗಿದ ಶಿವನ ವಂಶವೆಮದುಶಂಕೆ ಅಂಜಿಕೆ ದೂರ ಸರಿಸಿ ಬನ್ನಿಓ ಬನ್ನಿ ಯುವಜನರೆ ಬೇಗ ಬನ್ನಿ ಗುರು ಭಗವೆಯಡಿಯಲ್ಲಿ ನಿತ್ಯ ಸಾಧನೆ ನಮದುಶಕ್ತಗೊಳುತಿದೆ ನೈಜ ರಾಷ್ಟ್ರಭಕ್ತಿಶತಮಾನ […]

Read More

ಸಂಘ ಮಂದಿರವಿಂದು ಮೈತಳೆದು ನಿಂತಿಹುದು

ಸಂಘ ಮಂದಿರವಿಂದು ಮೈತಳೆದು ನಿಂತಿಹುದುಗರ್ಭಗುಡಿಯಲಿ ತಾಯ ದಿವ್ಯಮೂರ್ತಿಭಂಗವಿಲ್ಲದ ಪೂಜೆ ಅನುದಿನವು ನಡೆದಿಹುದುಆರದಂತುರಿದಿಹುದು ಧ್ಯೇಯಜ್ಯೋತಿ ದೇಗುಲದ ಭಿತ್ತಿಯೊಳು ಶಿಲೆಗಳಿವೆ ಹಲವುಬಗೆಅಡಿಗಲ್ಲು ತಾನಾದ ಕೇಶವನು ಅಂದುಬಾಗಿಲದು ತೆರೆದಿಹುದು ಬೆಳಕಿಹುದು ಒಳಹೊರಗೆಗುಡಿಯ ಮೆಟ್ಟಿಲು ಆದ ಮಾಧವನು ಅಂದು ಮಂತ್ರ ತಂತ್ರಗಳಿರದ ಮುಗ್ಧಭಾವದ ಜೊತೆಗೆಶ್ರಮ ಸಮಯಗಳೆ ಇಲ್ಲಿ ನೈವೇದ್ಯವುಯಾಂತ್ರಿಕತೆ ಸುಳಿವಿರದ ಅನುದಿನದ ಸಾಧನೆಗೆಗುರುಭಗವೆಯಾ ದಿವ್ಯ ಸಾನ್ನಿಧ್ಯವು ಪರಮವೈಭವಕಾಗಿ ಸಾಧನೆಯು ನಡೆದಿಹುದುಕೈಬೀಸಿ ಕರೆದಿಹುದು ಕಾರ್ಯಕ್ಷೇತ್ರರಾಷ್ಟ್ರದಾರಾಧನೆಗೆ ಶತಮಾನ ಸಂದಿಹುದುತಾಯ್ನೆಲವೆ ನಮಗಿಂದು ತೀರ್ಥಕ್ಷೇತ್ರ

Read More

ಗುರಿಯನು ತೋರಿದ ಶ್ರೀಗುರು ಭಗವೆಗೆ

ಗುರಿಯನು ತೋರಿದ ಶ್ರೀಗುರು ಭಗವೆಗೆ ನಮಿಪೆನು ಅನುದಿನ ಅಡಿಗಡಿಗೆ|ತ್ಯಾಗದ ಶೌರ್ಯದ ಓ ಪ್ರತಿನಿಧಿಯೇ ಸ್ಫೂರ್ತಿಯ ಕರುಣಿಸು ಸಕಲರಿಗೆ||ಪ|| ಧೈರ್ಯವ ತುಂಬುತ ಮೌಢ್ಯವ ಕಿತ್ತೊಗೆ ಧ್ಯೇಯದ ಜಾಗೃತಿ ನೀಡೆಮಗೆಮನದಲಿ ಕವಿದಿಹ ಜಡತೆಯ ನೀಗಿಸಿ ಬೆಳಕನು ಜ್ವಲಿಸು ನಮ್ಮೊಳಗೆ||೧|| ಶುದ್ಧತೆ ನೀಡುತ ಕಲುಷಿತ ಮನಸಿಗೆ ಆದ್ಯತೆ ಕಾರ್ಯದ ಬದ್ಧತೆಗೆಬುದ್ಧಿಮತ್ತೆಯ ಕೊಡು ಜತೆಜತೆ ನಡಿಗೆಗೆ ಸಿದ್ಧಗೊಳಿಸುನೀ ಏಕತೆಗೆ||೨|| ತರತಮವಿಲ್ಲದೇ ರಾಷ್ಟ್ರದ ಕಾರ್ಯಕೆ ಸರಿಸಮ ಭಾವವ ಕೊಡು ಜನಕೇಸರ್ವಸಮರ್ಪಣೆ ಇತ್ತಾ ನೆಲಕೆ ಪರಹಿತವೇ ಗುರಿ ಕಾಯಕಕೆ||೩||

Read More

ಮಾತೃಭೂಮಿಯ ಸೇವೆಗೈಯ್ಯುವ ಸರಳ ಸೂತ್ರದ ಹಂದರ

ಮಾತೃಭೂಮಿಯ ಸೇವೆಗೈಯ್ಯುವ ಸರಳ ಸೂತ್ರದ ಹಂದರಪುಣ್ಯಭೂಮಿಯ ಸತತ ನೆನೆಯುವ ನಿತ್ಯಸಾಧನೆ ಸುಂದರ ॥ ಪ॥ ಭಾಷೆ ಭಿನ್ನತೆ ಹಿಂದೆ ಸರಿದಿದೆ ಹಿಂದು ಸತ್ವವೆ ಪ್ರೇರಣೆದ್ವೇಷ ಕಳೆಯುತ ಶಕ್ತವಾಗಿದೆ ಸಾಮರಸ್ಯದ ಭಾವನೆದೋಷವೆಲ್ಲವ ಸರಿಸಿ ದೂರಕೆ ನಿತ್ಯ ನಡೆದಿದೆ ಸಾಧನೆನಾಶವಾಗಿದೆ ಸ್ವಾರ್ಥಲಾಲಸೆ ಸ್ವಂತವೆಲ್ಲವು ಅರ್ಪಣೆ ॥ 1 ॥ ಧ್ಯೇಯಮಾರ್ಗದಿ ನಡೆಯು ನಮ್ಮದು ಕಾರ್ಯಪದ್ಧತಿ ಸಾತ್ವಿಕದೇಶಕಾಗಿಯೆ ದುಡಿವ ಕಾರ್ಯಕೆ ಭಗವೆ ಎಮ್ಮಯ ಪ್ರೇರಕಸಿದ್ಧಗೊಂಡಿದೆ ಕಾರ್ಯಭೂಮಿಕೆ ವ್ಯಕ್ತಿ ವ್ಯಕ್ತಿಯು ಸಾಧಕಶತಕದಂಚಿನ ಸಂಘಕಾರ್ಯವೆ ನಾಡಿನೇಳ್ಗೆಗೆ ಪೂರಕ ॥ 2 ॥ ದೇಶಕಾರ್ಯವೆ ಈಶಕಾರ್ಯವು […]

Read More

ನಿಶೆಯು ಸರಿದಿದೆ ಜಡತೆ ನೀಗಿದೆ

ನಿಶೆಯು ಸರಿದಿದೆ ಜಡತೆ ನೀಗಿದೆ ಉಷೆಯು ಗಾರುಡಿ ಬೀಸಿದೆ ಕ್ಲೇಶ ಕಳೆದಿದೆ ಆಸೆ ಫಲಿಸಿದೆ ಯಶವು ನಾಡಿಗೆ ಕಾದಿದೆ || ಪ || ಸಂದ ಜಯವಿದು ಶುಭದ ಸೂಚನೆ ನನಸು ಸಾವಿರ ಕಲ್ಪನೆ ಕುಂದು ಕೊರತೆಯ ನೀಗಿ ವಿಶ್ವಕೆ ವಂದ್ಯರೆನಿಸಲು ಪ್ರೇರಣೆ || 1 || ಅಂದು ಯಜ್ಞಕೆ ಸಮಿಧೆಯಾದರು ದಾಸ ಶರಣರು ಸಂತರು ಇಂದು ಸೇವೆಯ ವ್ರತದಿ ಬದ್ಧರು ಕರ್ಮರಂಗದ ಧೀರರು || 2 || ಬಂಧುಭಾವವು ಐಕ್ಯ ತಂದಿದೆ ಜಾತಿಗೋಡೆಯ ಕೆಡವಿದೆ ಸ್ವಾರ್ಥ ಸುಳಿಯದ […]

Read More

ಜಗತ್ತಿಗೆ ಜಗದ್ಗುರು ಅನಿಸಿಕೊಂಡ ಭೂಮಿ ಇದು

ಜಗತ್ತಿಗೆ ಜಗದ್ಗುರು ಅನಿಸಿಕೊಂಡ ಭೂಮಿ ಇದು ರಾಮಾ ಕೃಷ್ಣ ಇಲ್ಲಿ ಅವತಾರ ತಾಳಿ ಹೋಗ್ಯಾರ್‍ರೀ| ಅವತಾರ ತಾಳಿ ಹೋಗ್ಯಾರ್‍ರೀ ಸ್ನೇಹ ತುಂಬಿದ್ ಆಚರಣೆ ಸಂಪದ್ಭರಿತ ದೇಶ ನಮದು ಮುತ್ತು ರತ್ನ ಬಜಾರದಾಗ ಮಾರುತ್ತಿದ್ದರ್‍ರೀ || ಪ || ಹೂಣ ಶಕ ಮೊಘಲರು ಡಚ್ ಫ್ರೆಂಚ್ ಆ೦ಗ್ಲಾರು ದೇಶ ಕೋಶ ನಾಶ ಮಾಡಿ ಜೀವ ತಗದಾರ್‍ರೀ| ನಮ್ಮ ಜೀವ ತಗದಾರ್‍ರೀ ಲಕ್ಷ ಲಕ್ಷ ಜನ ತಮ್ಮ ಮನಿ ಮಠ ಸುಟಗೊಂಡ್ರು ಸ್ವಾತಂತ್ರ ಇದು ನಮಗೆ ಹಂಗೆ ಸಿಕ್ಕಿಲ್ಲರ್‍ರೀ || […]

Read More

ಮಾಘ ಮಾಸದ ಚಳಿಯದು

ಮಾಘ ಮಾಸದ ಚಳಿಯದು ಮಾಗುತ ಬರುತಿದೆ ಸಂಕ್ರಮಣ ಉತ್ತರದೆಡೆಗೆ ಅರುಣನ ಪಯಣ ಕಿರಣದ ಸಂಚಲನ ಇರುಳನು ಸರಿಸುತ ಬೆಳಕನು ಹರಿಸುತ ಜ್ಞಾನದ ಅನುರಣನ ವ್ಯಕ್ತಿ ವ್ಯಕ್ತಿಯೊಳು ಮೊಳಗಿದೆ ಗಾನ ಹಿಂದೂ ಜಾಗರಣ || ಪ || ಬೆಲ್ಲದ ಸಿಹಿಯೊಳು ಎಳ್ಳಿನ ಜಿಡ್ಡೊಳು ಅಡಗಿದೆ ಗೆಲ್ಲುವ ಜಿದ್ದು ಜ್ಯೋತಿರ್ವರ್ಷದ ವೇಗದಿ ಹರಡಿದೆ ರಾಷ್ಟ್ರ ಭಕ್ತಿಯ ಸದ್ದು ಧರ್ಮದ ರಕ್ಷೆಯೆ ರಾಷ್ಟ್ರ ರಕ್ಷೆಯು ಬಾ ಹಿಂದುವೆ ಸಿಡಿದೆದ್ದು ಶತ್ರುವಿನೆದೆಯನು ಸೀಳುವ ಛಲವಿರೆ ಭದ್ರವು ಸರಹದ್ದು || 1 || ತಾಯಿ […]

Read More

ವ್ರತವ ತೊಡುವ ಬನ್ನಿ

ವ್ರತವ ತೊಡುವ ಬನ್ನಿ ಸೇವಾ ವ್ರತವ ತೊಡುವ ಬನ್ನಿ || ಪ || ಹೃದಯ ಹೃದಯಕೆ ಬೆಸುಗೆಯ ಹಾಕುವ ಅಸ್ಥಿರ ಬದುಕನು ಸಾರ್ಥಕಗೊಳಿಸುವ ನೊಂದು ಬೆಂದವರ ತೊಂದರೆ ನೀಗುವ ಎಲ್ಲೆಡೆ ಸ್ನೇಹದ ಲತೆಯನು ಬೆಳೆಸುವ || 1 || ಉನ್ನತ ಪದವಿಯ ಗೊಂದಲವಿಲ್ಲ ಧನಕನಕವೇ ಇಲ್ಲಿ ಪ್ರಧಾನವಲ್ಲ ಜಾತಿ ವರ್ಣವನು ಕೇಳುವುದಿಲ್ಲ ರೂಪಕೆ ಧೂಪವ ಹಾಕುವುದಿಲ್ಲ || 2 || ಅಂತರಂಗದಾ ಸಿರಿ ಹೊಂದಿರಬೇಕು ಅಂತರ ತೋರದ ಆಂತರ್ಯ ಬೇಕು ನಾನೆಂಬುದನು ಕಡೆಗಾಣ ಸಬೇಕು ತನುಮನದಲಿ ಬಲವುಕ್ಕಲೇ […]

Read More

ತಂದೆನಯ್ಯಾ ತಮ್ಮಾ ತಂದೆನಯ್ಯಾ

ತಂದೆನಯ್ಯಾ ತಮ್ಮಾ ತಂದೆನಯ್ಯಾ ಸ್ನೇಹದ ಹಸ್ತವ ಪ್ರೀತಿಯ ಹೃದಯವ || ಪ || ಮಾರು ದೂರ ಇದ್ದುಕೊಂಡು ಸಂಘವನ್ನು ಹಳಿಯಬೇಡ ತನ್ನನ್ನೇ ತಿದ್ದಿಕೊಂಡು ಓಡಿಬಂದು ಕರ್ಮವ ನೋಡ ನೋಡಿದಲ್ಲಿ ಮರೆವೀ ನೀನು ತಂತನವನು ತಮ್ಮಾ || 1 || ಹೆದರಿ ಹೆದರಿ ಸರಿಯಬ್ಯಾಡ ಉದುರಿ ಉದುರಿ ಹೋಗಲು ಬ್ಯಾಡ ಹೇಡಿತನವ ಬಿಟ್ಟು ತಮ್ಮಾ ಧೈರ್ಯತನವ ತಂದು ಮುಂದು ವೀರಭದ್ರನಾಗು ತಮ್ಮಾ ಭದ್ರನಾಗಿರು || 2 || ಮನಸ್ಸಿನ ಭೇದವ ಬಿಟ್ಟು ಕನಸಿನ ರೋಷವ ಕಟ್ಟು ಕನಸು ಮನಸು […]

Read More

ಜಯ ಜಯ ಜಯ ಜನ್ಮಭೂಮಿ

ಜಯ ಜಯ ಜಯ ಜನ್ಮಭೂಮಿ ಜಯ ಜಯ ಜಯ ಮಾತೃಭೂಮಿ || ಪ || ಆಕಾಶಗಂಗೆ ಇಳಿದು ಬಂದ ಭೂಮಿ ಶ್ರೀ ಕೃಷ್ಣಗೀತೆಯ ಅಮೃತವಿತ್ತ ಭೂಮಿ || ಅ.ಪ || ಸ್ನೇಹದ ಕುಸುಮಮಾಲೆ ಧರಿಸಿದ ಭೂಮಿ ತ್ಯಾಗಿಗಳು ಜನಿಸಿರುವ ಪಾವನ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತಭೂಮಿ ಭಾಸುರಭೂಮಿ || 1 || ಹೈಮಾದ್ರಿ ವಿಂಧ್ಯಗಳ ಉನ್ನತಭೂಮಿ ಕಾವೇರಿ ಗಂಗೆಗಳು ಹರಿಯುವ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತಭೂಮಿ ಭಾಸುರಭೂಮಿ || 2 ||

Read More